ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ನಗೆ ಹೊಗೆ-೧ ಸೆಪ್ಟೆಂಬರ್ 21, 2010

ನಮ್ಮ ಮಂದಣ್ಣ ಎಸ್ ಎಲ್ ಸಿ ಪರೀಕ್ಷೆನಲ್ಲಿ ಡುಮುಕಿ ಹೊಡೆದ.

ತಂದೆ: ಲೋ ಮಗನೇ ನೀ ಏನ ಮಾಡಾಕ್ ಹತ್ತಿ, ಪಕ್ಕದ್ಮ್ನೆ ಜಲಜ ಪಸ್ಟ್ ಬಂದಾಳಂತಲ್ಲೋ…
ನೀನೋ ಫೇಲಾಗಿದೀಯ, ಇನ್ನಾರ ಅವಳ್ನ ನೋಡಿ ಕಲಿತ್ಕೋ.

ಮಂದಣ್ಣ ಎರಡನೇ ಬಾರೀನೂ ಪರೀಕ್ಷೆನಲ್ಲಿ ಡುಮುಕಿ ಹೊಡೆದ.

ತಂದೆ: ಲೋ ಮಗನಾ, ಈಸಲ ಏನಾತೋ?

ಮಗ: ನೀ ಹೇಳ್ದಂಗ ಮಾಡ್ದೆ ಅಪ್ಪ, ಅವಳ್ನ ನೊಡೀ, ನೋಡಿ.. ನಾ….

ತಂದೆ ನಿನ್ನ ವಯಸ್ಸಿನ ಹುಡುಗ್ರು ಓದು, ಬರಹದಲ್ಲಿ ಎಷ್ಟು ಶ್ರದ್ದೆ ವಹಿಸ್ತಾರಂತ ನಿನಗ ಗೊತ್ತದೇನ್?

“ಲಾಲ್ಬಹದ್ದೂರ್ ಶಾಸ್ತ್ರಿಯವರು ನಿನ್ ವಯಸಿನಾಗ ಆ ದಡದಿಂದ ಈ ದಡಕ್ಕ ಈಜಿ, ನದಿ ದಾಟಿಕೊಂಡು ಸಾಲೀಗೆ ಹೋಗಿ ಬರ್ತಿದ್ರು. ರಾತ್ರಿ ಸೀಮೆ ಎಣ್ಣೆ ಬೆಳಕಿನಲ್ಲಿ ಪಾಠ ಓದ್ತಿದ್ರು.” ಗೊತ್ತದೇನ ನಿನಗ? ಅಂತ ಮೂದಲಿಸಿದ್ರು.”

ಮಂದಣ್ಣ ಮುಖ ಗಂಟು ಹಾಕಿಕೊಂಡು “ಇರಬಹುದು, ನಿನ್ನ ವಯಸ್ಸಿನಾಗ ರಾಧಾಕ್ರಿಷ್ಣನ್ ರಾಷ್ಟಪತಿ ಆಗಿದ್ರು” ಅಂದ.

-ಸಂಗ್ರಹ